ದಕ್ಷಿಣ ಭಾರತ - ಭಾರತ ದೇಶದ ದಕ್ಷಿಣದಲ್ಲಿನ ಈಗಿನ ಆರು ರಾಜ್ಯಗಳನ್ನು ಒಳಗೊಂಡಿರುವ ಭೂಭಾಗ.
ದಕ್ಷಿಣ ಭಾರತವು ಉತ್ತರಕ್ಕೆ ಮಾತ್ರ ಭೂಮಿಯೊಂದಿದ್ದು, ಇನ್ನು ಮೂರೂ ದಿಕ್ಕಿನಲ್ಲಿ ನೀರಿನಿಂದ ಆವೃತಗೊಂಡಿದೆ.
ಪೂರ್ವದಲ್ಲಿ ಬಂಗಾಳ ಕೊಲ್ಲಿ, ಪಶ್ಚಿಮದಲ್ಲಿ ಅರಬ್ಬಿ ಸಮುದ್ರ ಮತ್ತು ದಕ್ಷಿಣದಲ್ಲಿ ಹಿಂದೂ ಮಹಾಸಾಗರ ದಕ್ಷಿಣ ಭಾರತವನ್ನು ಸುತ್ತುವರೆದಿವೆ.
ಚೋಳರು, ಪಾಂಡ್ಯರು, ಪಲ್ಲವರು, ಚಾಲುಕ್ಯರು, ಬಹಮನಿ ಸುಲ್ತಾನರು ದಕ್ಷಿಣ ಭಾರತವನ್ನಾಳಿದ ಪ್ರಮುಖರು. ಅವರೊಡನೆ, ಕದಂಬರು, ವಿಜಯನಗರ ಸಾಮ್ರಾಜ್ಯದವರು, ಮೈಸೂರು ಅರಸರು ಹಲವಾರು ಪ್ರಾಂತ್ಯಗಳ ರಾಜ್ಯಭಾರ ಮಾಡಿದರು.
ದಕ್ಷಿಣ ಭಾರತದ ಬಹುತೇಕ ಪ್ರಾಂತ್ಯಗಳನ್ನು ಗೆದ್ದು, ದಕ್ಷಿಣ ಭಾರತದ ಸಾಮ್ರಾಟನಾಗಿ ದಕ್ಷಿಣ ಪಥೇಶ್ವರ ಎಂಬ ಬಿರುದಿಗೆ ಪಾತ್ರನಾದವನು ಚಾಲುಕ್ಯರ ಇಮ್ಮಡಿ ಪುಲಿಕೇಶಿ. ಸರಿಸುಮಾರು ಇದೇ ಸಮಯದಲ್ಲಿ, ಉತ್ತರ ಭಾರತದಲ್ಲಿ ಹರ್ಷವರ್ಧನನ ಸಾಮ್ರಾಜ್ಯವು ಆಳ್ವಿಕೆಯಲ್ಲಿದ್ದು ಆತನು ಉತ್ತರ ಪಥೇಶ್ವರ ಎಂಬ ಬಿರುದಿಗೆ ಪಾತ್ರನಾಗಿದ್ದನು.
ದಕ್ಷಿಣ ಭಾರತದ ರಾಜ್ಯಗಳುಕರ್ನಾಟಕ | ಆಂಧ್ರ ಪ್ರದೇಶ | ತಮಿಳುನಾಡು | ಕೇರಳ | ತೆಲಂಗಾಣ |