Theodore Roosevelt[೧]
ನೈಸರ್ಗಿಕ ಸಂಪನ್ಮೂಲಗಳು ಭೂಮಿ ಅಥವಾ ಕಚ್ಛಾ ವಸ್ತುಗಳನ್ನು ) ಆರ್ಥಿಕಮಾನದಂಡ ಎಂದು ಉಲ್ಲೇಖಿಸಲಾಗಿದೆ) ಪರಿಸರದಲ್ಲಿ ಮಾನವರಿಂದ ಸ್ಥಾನಪಲ್ಲಟಕ್ಕೆ ಈಡಾಗದೇ ಇರುವಾಗ ಅವುಪ್ರಾಕೃತಿಕ ರೂಪದಲ್ಲಿ ಇರುತ್ತವೆ. ನೈಸರ್ಗಿಕ ಸಂಪನ್ಮೂಲವನ್ನು ವಿವಿಧ ಪರಿಸರ ವ್ಯವಸ್ಥೆಯಲ್ಲಿ ಅಸ್ತಿತ್ವದಲ್ಲಿರುವ ಜೀವವೈವಿಧ್ಯತೆಯ ಆಧಾರದ ಮೇಲೆ ವಿಂಗಡಿಸಲಾಗಿದೆ.
ನೈಸರ್ಗಿಕ ಸಂಪನ್ಮೂಲಗಳೆಲ್ಲವೂಪರಿಸರ ಜನ್ಯ. ಹೆಚ್ಚಿನವುಗಳು ನಮ್ಮ ಉಳಿವಿಕೆಗೆ ಅತ್ಯವಶ್ಯಕ, ಮಿಕ್ಕವು ನಮ್ಮ ಬಯಕೆ ಪೂರೈಸಲು ಇರುವ ಸಾಧನಗಳು.ನೈಸರ್ಗಿಕ ಸಂಪನ್ಮೂಲಗಳನ್ನು ವಿವಿಧ ರೀತಿಯಲ್ಲಿ ವಿಂಗಡಿಸಬಹುದು.
ದೊರೆಯುವ ಮೂಲದ ಆಧಾರದ ಮೇಲೆ, ಸಂಪನ್ಮೂಲಗಳನ್ನು ಹೀಗೆ ವಿಂಗಡಿಸಬಹುದು;
ಅವುಗಳ ಅಭಿವೃದ್ಧಿಯ ಹಂತಗಳನ್ನು ಗಮನದಲ್ಲಿಟ್ಟುಕೊಂಡು, ನೈಸರ್ಗಿಕ ಸಂಪನ್ಮೂಲಗಳನ್ನು ಈ ಕೆಳಗಿನಂತೆ ಸೂಚಿಸಬಹುದು:
ನೈಸರ್ಗಿಕ ಸಂಪನ್ಮೂಲಗಳನ್ನು ಅವುಗಳಿಗಿರುವ ನವೀಕರಣ ಸಾಮರ್ಥ್ಯದ ಆಧಾರದ ಮೇಲೆ, ಈ ಕೆಳಗಿನಂತೆ ವಿಭಾಗಿಸಬಹುದು:
ನೈಸರ್ಗಿಕ ಸಂಪನ್ಮೂಲಗಳ ಕೆಲವು ಉದಾಹರಣೆಗಳು ಈ ಹೀಗಿವೆ:
ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಯು ನೆಲ, ನೀರು, ಮಣ್ಣು, ಗಿಡಗಳು ಮತ್ತು ಪ್ರಾಣಿಗಳು ಮುಂತಾದ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯು ಪ್ರಸ್ತುತ ಮತ್ತು ಭವಿಷ್ಯದ ಪೀಳಿಗೆಯ ಜೀವನ ಗುಣಮಟ್ಟದ ಮೇಲೆ ಹೇಗೆ ಪರಿಣಾಮ ಬೀರಬಲ್ಲದು ಎಂಬುದನ್ನು ಒಳಗೊಂಡಿರುವ ಒಂದು ವಿಧಾನ. ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯು ಸಮರ್ಥನೀಯ ಅಭಿವೃದ್ಧಿಯ ಕಲ್ಪನೆಯೊಂದಿಗೆ ಸಂಬಂಧ ಹೊಂದಿದೆ. ಭೂಮಿಯ ದೇಖರೇಖೆ ಮತ್ತು ಪರಿಸರ ಸಂರಕ್ಷಣೆಗೆ ಪ್ರಪಂಚದಾದ್ಯಂತ ಈ ಕಲ್ಪಿತ ತತ್ತ್ವವೇ ಆಧಾರ.
ನಗರ ಯೋಜನೆಯ ನಿಯಮಗಳು ಮತ್ತು ಪರಿಸರ ನಿರ್ವಹಣೆಯ ವಿಸ್ತೃತ ಕಲ್ಪನೆಗೆ ಪ್ರತಿಯಾಗಿ, ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯು ನಿರ್ದಿಷ್ಟವಾಗಿ ಸಂಪನ್ಮೂಲಗಳ ವೈಜ್ಞಾನಿಕ ಮತ್ತು ತಾಂತ್ರಿಕ ತಿಳಿವಳಿಕೆ ಮತ್ತು ಆ ಸಂಪನ್ಮೂಲಗಳ ಪರಿಸರ ವಿಜ್ಞಾನ ಮತ್ತು ಜೀವರಾಶಿಯ ಆಧಾರ ಸಾಮರ್ಥ್ಯದತ್ತ ಬೆಳಕು ಚೆಲ್ಲುತ್ತದೆ.[೩]
ಇತ್ತೀಚಿನ ವರ್ಷಗಳಲ್ಲಿ, ನೈಸರ್ಗಿಕ ಸಂಪನ್ಮೂಲಗಳ ಖಾಲಿಮಾಡುವುದು ಮತ್ತು [[ಪುಷ್ಟಿಕ
ರ ಅಭಿವೃದ್ಧಿ|ಸಮರ್ಥ ಅಭಿವೃದ್ಧಿ]]ಗೆ ಪ್ರಯತ್ನಿಸುವುದು ಅಭಿವೃದ್ದಿ ಸಂಸ್ಥೆಗಳ ಪ್ರಮುಖ ಕೆಲಸವಾಗಿದೆ. ಯಾರೂ ತುಂಬಿಕೊಡಲಾಗದಂಥ ಜೀವ ವೈವಿಧ್ಯತೆಯನ್ನು ಒಳಗೊಂಡಿರುವ ನೈಸರ್ಗಿಕ ರಾಜಧಾನಿ ಎನಿಸಿರುವ ಮಳೆಕಾಡು ಪ್ರದೇಶಗಳಲ್ಲಿ ಈ ಕಳಕಳಿ ಅಧಿಕವಾಗಿದೆ.ನೈಸರ್ಗಿಕ ಸ್ಥಿತಿವಂತಿಕೆ, ಪರಿಸರ ವಾದ,, ಪರಿಸರ ವಿಜ್ಞಾನ ಚಳವಳಿ, ಮತ್ತು ಹಸಿರು ನೀತಿ- ಈ ಎಲ್ಲ ಚಳವಳಿಗಳದ್ದೂ ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಯದ್ದೇ ನೈಸರ್ಗಿಕ ಸ್ಥಿತಿವಂತಿಕೆಮೂಲ ಮಂತ್ರ.ಸಾಮಾಜಿಕ ಅಶಾಂತಿ ಮತ್ತು ಸಂಘರ್ಷಗಳೇ ಬರಿದಾಗುವಿಕೆಯ ಮೂಲ ಕಾರಣ ಎಂದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿನ ಕೆಲವರ ಅಭಿಮತ.
ಗಣಿಗಾರಿಕೆ, ಪೆಟ್ರೋಲಿಯಂ ಹೊರತೆಗೆಯುವಿಕೆ, ಮೀನುಗಾರಿಕೆ, ಬೇಟೆಯಾಡುವುದು, ಮತ್ತು ಅರಣ್ಯಾವಲಂಬನೆ ಮುಂತಾದವುಗಳನ್ನು ಸಾಮಾನ್ಯವಾಗಿ ನೈಸರ್ಗಿಕ-ಸಂಪನ್ಮೂಲ ಉದ್ಯಮವನ್ನಾಗಿ ಪರಿಗಣಿಸಲಾಗಿದೆ. ಕೃಷಿಯನ್ನು ಮಾನವ-ನಿರ್ಮಿತ ಸಂಪನ್ಮೂಲವೆಂದು ಗುರುತಿಸಲಾಗಿದೆ. ಪ್ರಸಿದ್ಧ ಪರಿಸರ ವಾದಿ ಮತ್ತು ಯುನೈಟೆಡ್ ಸ್ಟೇಟ್ಸ್ನ ಮಾಜಿ ಅಧ್ಯಕ್ಷರಾದ ಥಿಯೊಡರ್ ರೂಸ್ವೆಲ್ಟ್ ಮಿತಿಮೀರಿದ ನೈಸರ್ಗಿಕ ಸಂಪನ್ಮೂಲಗಳ ಹೊರತೆಗೆಯುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. "ರಾಷ್ಟ್ರವೊಂದರ ನೈಸರ್ಗಿಕ ಸಂಪನ್ಮೂಲಗಳು ಖನಿಜಗಳು, ಶಕ್ತಿ, ನೆಲ, ಜಲ, ಮತ್ತು ಜೀವಿ ಸಮೂಹಗಳನ್ನು ಒಳಗೊಂಡಿರುತ್ತವೆ."[೪]-ಎಂದು ಯುನೈಟೆಡ್ ಸ್ಟೇಟ್ಸ್ ಜಿಯಲೋಜಿಕಲ್ ಸರ್ವೇ (=ಯುನೈಟೆಡ್ ಸ್ಟೇಟ್ಸ್ ಭೌಗೋಳಿಕ ಸಮೀಕ್ಷೆ)ಯು ಪದವನ್ನು ಹೀಗೆಂದು ವ್ಯಾಖ್ಯಾಸಿದೆ.
ಭೂಮಿಯ ಜೀವ ವೈವಿಧ್ಯತೆಯ ಸ್ವಭಾವ ಮತ್ತು ಸ್ಥಿತಿಗತಿಯ ವೈಜ್ಞಾನಿಕ ಅಧ್ಯಯನವೇ ಸಂರಕ್ಷಣಾ ಜೀವ ವಿಜ್ಞಾನ.[೫][೬] ಜೀವಿಗಳು, ಅವುಗಳ ಆವಾಸಸ್ಥಾನ ಮತ್ತು ಪರಿಸರ ವ್ಯವಸ್ಥೆಯನ್ನು ಮಿತಿಮೀರಿದ ವೇಗದಲ್ಲಿ ನಾಶ ಆಗುವುದನ್ನು ತಪ್ಪಿಸುವುದು ಇದರ ಗುರಿ. ವಿಜ್ಞಾನ, ಅರ್ಥಶಾಸ್ತ್ರ ಮತ್ತು ನೈಸರ್ಗಿಕ ಸಂಪನ್ಮೂಲ ನಿರ್ವಹಣೆ- ಈ ವಿಷಯಗಳನ್ನು ಹಾಸುಹೊಕ್ಕಾಗಿ ಉಳ್ಳ ಒಂದು ಅಧ್ಯಯನ.ಸಂರಕ್ಷಣಾ ಜೀವ ವಿಜ್ಞಾನ ಎಂಬ ಪದಗುಚ್ಛವನ್ನು, ಜೀವ ವಿಜ್ಞಾನಿಗಳಾದ ಬ್ರೂಸ್ ವಿಲ್ಕೋಕ್ಸ್ ಮತ್ತು ಮೈಕೆಲ್ ಸೋಲ್ರವರು ಸಂಘಟಿಸಿದ ಸ್ಯಾನ್ ಡಿಯಾದಲ್ಲಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯವು ಕ್ಯಾಲಿಫೋರ್ನಿಯಾದ ಲಾ ಜೊಲ್ಲಾದಲ್ಲಿ 1978ರಲ್ಲಿ ನಡೆಸಿದ ಅಧಿವೇಶನದ ಶೀರ್ಷಿಕೆಯಾಗಿ ಬಳಕೆಗೆ ಬಂತು.
ಆವಾಸಸ್ಥಾನ ಸಂರಕ್ಷಣೆಯು ಒಂದು ನೆಲ ನಿರ್ವಹಣೆ. ಅದು ಕಾಡು ಪ್ರಾಣಿಗಳಿಗಾಗಿ, ವಿಶೇಷವಾಗಿ ಸಂರಕ್ಷಣೆ ಮಾಡಲೇಬೇಕಾದ ಜೀವಿಗಳು, ಮತ್ತು ಗಿಡಗಳಿಗಾಗಿ ಆವಾಸಸ್ಥಾನ ಪ್ರದೇಶಗಳನ್ನು ಸಂರಕ್ಷಿಸಲು, ಮತ್ತು ಕಾಪಾಡಲು ಪ್ರಯತ್ನಿಸುತ್ತದೆ. ಸಂಖ್ಯಾ ಶ್ರೇಣಿಯಲ್ಲಿ ಅವುಗಳ ನಾಶ ತಡೆ,ಛಿದ್ರೀಕರಣ ಅಥವಾ ಅಳಿವಿನಂಚಿಗೆ ಹೋಗುವುದನ್ನು ತಡೆಯುತ್ತದೆ.[೭] ಇದು ಅನೇಕ ಗುಂಪುಗಳ ಆದ್ಯವಿಷಯ ಇದನ್ನು ಯಾವುದೇ ಒಂದು ಸಿದ್ಧಾಂತದ ನಿಯಮದಿಂದ ಸುಲಭವಾಗಿ ವಿವರಿಸಲು ಸಾಧ್ಯವಿಲ್ಲ.