ಭ್ರಷ್ಟಾಚಾರವು ಯಾವುದೇ ವ್ಯಕ್ತಿ ನಿಯಮಬಾಹಿರವಾದ ಮತ್ತು ತನಗೆ ತಮ್ಮವರಿಗೆ ನ್ಯಾಯಬದ್ಧವಾಗಿ ಸಲ್ಲಬೇಕಾದುದಕ್ಕಿಂತ ಹೆಚ್ಚಿನ ಸೌಲಭ್ಯ ಅಥವಾ ವಸ್ತು ಯಾ ಹಣ ಪಡೆಯುವುದು ಅಥವಾ ಲಾಭಮಾಡಿಕೊಳ್ಳುವುದು ಎನ್ನಬಹುದು. ಸಾರ್ವಜನಿಕ ಸೇವಾ ಸ್ಥಾನದಲ್ಲಿರುವವರು, ಜನ ಪ್ರತಿನಿಧಿಗಳು ಅಥವಾ ಸರಕಾರದ ಅಧಿಕಾರಿಗಳು ಯಾ ಸೇವಕರು ನಿಯಮ ಬಾಹಿರವಾಗಿ ಅಥವಾ ತಮ್ಮ ಆ ಸ್ಥಾನವನ್ನು ಉಪಯೋಗಿಸಿಕೊಂಡು ನಿಯಮಕ್ಕಿಂತ ಹೆಚ್ಚಿನ ಅಥವಾ ತಮಗೆ ಸಲ್ಲಬೇಕಾದುದಕ್ಕಿಂತ ಹೆಚ್ಚಿನ ಸೌಲಭ್ಯ ಅಥವಾ ಲಾಭ ಪಡೆಯುವುದು. ತಮ್ಮ ಅಧಿಕಾರವನ್ನು ನಿಯಮಕ್ಕೆ ವಿರುದ್ಧವಾಗಿ ಸ್ವಂತ ಉಪಯೋಗಕ್ಕೆ ಬಳಸಿಕೊಳ್ಳುವುದು.
ಪ್ರಕರಣ ದಾಖಲಾದರೂ ನ್ಯಾಯ ನೀಡಿಕೆ ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗುವಲ್ಲಿ ವಿಳಂಬವಾಗುತ್ತಿರುವುದರಿಂದ ಭ್ರಷ್ಟಾಚಾರ ನಿಯಂತ್ರಣ ಪರಿಣಾಮಕಾರಿಯಾಗುತ್ತಿಲ್ಲ. ಹೀಗಾಗಿ ಹಲವೆಡೆ ಜನರು ದೂರು ನೀಡಲೂ ಹಿಂದೇಟು ಹಾಕುತ್ತಿದ್ದಾರೆ ಎಂದು ‘ಕಾಮನ್ವೆಲ್ತ್ ಹ್ಯೂಮನ್ ರೈಟ್ಸ್ ಇನಿಷಿಯೇಟಿವ್’ ಹೇಳಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಬಿಡುಗಡೆ ಮಾಡಿರುವ ವರದಿಯನ್ನು ಅಧ್ಯಯನ ಮಾಡಿ ಸಂಸ್ಥೆ ಈ ವರದಿ ಸಿದ್ಧಪಡಿಸಿದೆ.
ವಿವರ | ಸಂಖ್ಯೆ |
---|---|
ದಾಖಲಾದ ಪ್ರಕರಣಗಳು | 54,139 |
ವಿಚಾರಣೆ ಮುಗಿದವು | 29,920 |
ವಿಚಾರಣೆ ಎದುರಿಸಿದವರು | 47,460 |
ಶಿಕ್ಷೆಗೆ ಗುರಿಯಾದವರು | 10,571 |
ಖುಲಾಸೆಗೊಂಡವರು. | 30,720 |
ರಾಜ್ಯ | ಪ್ರಕರಣಗಳು | ವಿಚಾರಣೆ ಮುಗಿದವು | ಶಿಕ್ಷೆಗೆ ಗುರಿಯಾದವರು | ವಿಚಾರಣೆ ಎದುರಿಸಿದವರು | ಖುಲಾಸೆಗೊಂಡವರು |
ಮಹಾರಾಷ್ಟ್ರ | 8875 | 6399 | 1592 | 8055 | 7117 |
ರಾಜಸ್ಥಾನ | 8369 | 2018 | 741 | 4214 | 3021 |
ಒಡಿಶಾ | 5085 | 1865 | 743 | 2467 | 1586 |
ಕರ್ನಾಟಕ | 4732 | 2958 | 614 | 3394 | 3660 |
ಆಂಧ್ರಪ್ರದೇಶ | 3804 | 1925 | 1058 | 2541 | 1210 |
ಭ್ರಷ್ಟಾಚಾರ ಮಟ್ಟ ಸೂಚ್ಯಂಕದಲ್ಲಿ (ಸಿಪಿಐ) | . | ಭ್ರಷ್ಟಾಚಾರ | . | ಅಣ್ಣಾ ಹಜಾರೆ | . | ಮೇಧಾ ಪಾಟ್ಕರ್ | ||
ಭ್ರಷ್ಟಾಚಾರದ ಸುಳಿಯಲ್ಲಿ ಭಾರತ | . | ಲೋಕಾಯುಕ್ತ | . | ಲೋಕಪಾಲ ಮಸೂದೆ | . | ಅರವಿಂದ್ ಕೇಜ್ರಿವಾಲ್ | . | ಬಿ.ಎಸ್. ಯಡಿಯೂರಪ್ಪ |